ಎಂ.ಎಸ್.ಶ್ರೀರಾಮ್.
Shashi Rajagopalan: A Personal Essay
5 months ago
© ಎಂ.ಎಸ್.ಶ್ರೀರಾಮ್ |


ಹೀಗೆ ಜಗತ್ತಿನ್ನು ತನ್ನ ವಿಕಾಸಕ್ಕೆ ಆಹ್ವಾನಿಸುತ್ತಿರುವ ಮುಕ್ತ ಮಾರುಕಟ್ಟೆಯಲ್ಲಿ ನಮಗೆ ಕಾಣುವುದು ಏನು? ಅಲ್ಲಿ ಸಿಟಿ ಬ್ಯಾಂಕಿನ ಒಂದು ಶಾಖೆಯೂ ಇಲ್ಲ. ಎಟಿಎಂ ಇಲ್ಲ. ಆದರೆ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಒಂದು ಶಾಖೆ ಇದೆ. ಅಲ್ಲಿ ಐದು ಭಾರತೀಯರೂ ನಾಲ್ವರು ಅಪಘನಿಗಳೂ ಸೇರಿ ಅದನ್ನು ನಡೆಸುತ್ತಿದ್ದಾರೆ. ಅಲ್ಲಿನ ರಸ್ತೆಗಳನ್ನು ನಮ್ಮ ದೇಶದವರು ಕಟ್ಟುತ್ತಿದ್ದಾರೆ. ಅವರ ಸಂಸದ್ ಸದನವನ್ನ ಭಾರತ ನಿರ್ಮಿಸಿ ಕೊಡುತ್ತಿದೆ. ಹಾಗೂ ಯಾವ ಪಾಶ್ಚಾತ್ಯ ದೇಶದ ವಿಮಾನವೂ ಹೋಗದೆಡೆಯಲ್ಲಿ ಏರ್ ಇಂಡಿಯಾ ಪ್ರತಿನಿತ್ಯದ ಫ್ಲೈಟನ್ನು ಹಾರಿಸುತ್ತಿದೆ. ಭಾರತೀಯರಾಗಿ ನಾವು ಹೆಮ್ಮೆಪಡಲು ಈ ಎಲ್ಲವೂ ಸಾಲದೇ? ವಿಕಸಿತ ದೇಶಗಳೆಲ್ಲಾ ಶಸ್ತ್ರಾಸ್ತ್ರಗಳನ್ನು ಕೊಡುತ್ತಿರುವ ಸಂದರ್ಭದಲ್ಲಿ ಭಾರತದ ಮಹತ್ವವನ್ನು ನಾವು ಸಂಭ್ರಮದಿಂದ ಕೊಂಡಾಡಬೇಕಾಗಿದೆ.. ಭಾರತೀಯರಿಗೆ ಅಲ್ಲಿಗೆ ಹೋಗಲು ವೀಸಾದ ಚಾರ್ಜು ಸೊನ್ನೆ. ಅಮೆರಿಕನ್ನರಿಗೆ ಮೂವ್ವತ್ತು ಡಾಲರುಗಳು. ಸಹಜವೇ ಅಲ್ಲವೇ?© ಎಂ.ಎಸ್.ಶ್ರೀರಾಮ್ |

© ಎಂ.ಎಸ್.ಶ್ರೀರಾಮ್ |



© ಎಂ.ಎಸ್.ಶ್ರೀರಾಮ್ |
ಅಂದು ವೇದಿಕೆಯ ಮೇಲೆ ಕೂತಿದ್ದವರನ್ನು ನಾನು ಅವಲೋಕಿಸಿದೆ. ಇದ್ದ ಐದು ಜನರಲ್ಲಿ ಇಬ್ಬರು ವ್ಯಾಪಾರ ಜಗತ್ತಿನಿಂದ ಬಂದವರು. ಇಬ್ಬರು ಸಮಾಜಸೇವೆ - ಜನರನ್ನೊಳಗೊಳ್ಳುನ ವಿಕಾಸವಾದವನ್ನು ಪ್ರತಿಪಾದಿಸುವವರು. ಐದನೆಯವನು - ಯಾವ ಕಡೆ ವಾಲಿದ್ದೇನೆಂದು ತಿಳಿಯದ ನಾನು.
ಹಾಗೆ ನೋಡಿದರೆ ಉತ್ತಮ ಪರಿಸರಕ್ಕಾಗಿ ಹೋರಾಡುವ ಪರಿಸರವಾದಿ ಕಾರ್ತಿಕೇಯ ಸಾರಾಭಾಯಿಗೂ, ಬಂಡವಾಳ ಹೂಡಿ ವಿಷಪೂರಿತ ರಾಸಾಯನಿಕ ವಸ್ತುಗಳನ್ನು ನದಿಯಲ್ಲಿ ಹರಿಯಬಿಡಬಹುದಾದ ಉದ್ಯೋಗಪತಿಗೂ, ಮೂಲಭೂತ ವ್ಯತ್ಯಾಸ ಎಲ್ಲಿದೆ? ಯಾವ ವ್ಯಾಪರಿಯೂ ತನ್ನ ಗ್ರಾಹಕರ ಅನಾರೋಗ್ಯ ಮತ್ತು ಸಾವಿನ ಆಧಾರದ ಮೇಲೆ ಲಾಭ ಗಳಿಸಬೇಕೆಂದು ಆಶಿಸುವುದಿಲ್ಲ. ಹಾಗೆ ಆಶಿಸುವ ವ್ಯಾಪಾರಿಗಳ ಬಗ್ಗೆ ಈ ಚರ್ಚೆ ಅಲ್ಲ. ಆದರೆ ವ್ಯಾಪರವನ್ನು ನಡೆಸುವ, ಪರಿಸರ - ಜನಸಮುದಾಯವನ್ನು ಯಾವ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆನ್ನುವ ಮಿತಿಗಳು, ಭಿನ್ನ ವ್ಯಾಪಾರಗಳಿಗೆ- ವ್ಯಾಪಾರಿಗಳಿಗೆ, ಭಿನ್ನವಾಗಿರುತ್ತವೆ. ಪೆಪ್ಸಿ ಸಂಸ್ಥೆಯ ಮುಖ್ಯಸ್ತೆ ಇಂದಿರಾ ನೂಯಿಗೂ, ಆ ಬಗ್ಗೆ ಹುಯಿಲಬ್ಬಿಸಿದ ಪರಿಸರವಾದಿ ಸುನೀತಾ ನಾರಾಯಣ್ ಗೂ ಆಲೋಚನೆ ವಿಚಾರವಾದದ ಮಟ್ಟಿನಲ್ಲಿ ಮೂಲಭೂತ ಭಿನ್ನತೆ ಎಲ್ಲಿದೆ? ಎನ್ನುವ ಪ್ರಶ್ನೆ ಕುತೂಹಲದ್ದು. ಈ ಪ್ರಶ್ನೆಗೆ ನಾವು ಉತ್ತರಗಳನ್ನು ಹುಡುಕಹೊರಟರೆ ಈ ವಿಚಾರಧಾರೆಯ ಭಿನ್ನತೆ ಸ್ವಲ್ಪ ಮಟ್ಟಿಗೆ ನಮಗೆ ಅರ್ಥವಾಗುತ್ತದೆ ಅನ್ನಿಸುತ್ತದೆ. ಆದರೆ ನಾನು ಹೇಳಹೊರಟಿರುವ ಭಿನ್ನತೆ ಜಟಿಲವಾದ ಸಮಸ್ಯೆಯ ಒಂದು ಆಯಾಮ ಮಾತ್ರವೆನ್ನುವುದನ್ನು ನಾವು ಮನಗಾಣಬೇಕು.© ಎಂ.ಎಸ್.ಶ್ರೀರಾಮ್ |
ಬಡಕುಟುಂಬಗಳ ಜೀವನದಲ್ಲಿ ಬೇಕಾದ ವಿತ್ತೀಯ ಸೇವೆಗಳ ಬಗೆಗಿನ ಮಾಹಿತಿಯನ್ನು ಪರಿಶಿಲಿಸೋಣ. 1971ರಲ್ಲಿ ನಡೆಸಿದ್ದ ರಾಷ್ಟ್ರೀಯ ದಶಮಾನ ಸರ್ವೆಯ ಪ್ರಕಾರ ಗ್ರಾಮೀಣ ಕುಟುಂಬಗಳ ಸುಮಾರು 30 ಪ್ರತಿಶತ ಸಾಲದ ಮೊತ್ತ ಮಾತ್ರ ಸಂಸ್ಥಾಗತ ಮೂಲಗಳಿಂದ [ಬ್ಯಾಂಕು, ಸಹಕಾರ ಸಂಘ - ಹೀಗೆ] ಬಂದಿದ್ದರೆ ಮಿಕ್ಕ 70 ಪ್ರತಿಶತ ಸಾಲದ ಮೊತ್ತವನ್ನು ಇತರ ಮೂಲಗಳಿಂದ ಈ ಕುಟುಂಬಗಳು ಪಡೆದಿದ್ದವು. ಬ್ಯಾಂಕುಗಳ ರಾಷ್ಟ್ರೀಕರಣ ಆಗಷ್ಟೇ ಆಗಿತ್ತು. 1981ಕ್ಕೆ ಬರುವ ವೇಳೆಗೆ ಸುಮಾರು 60 ಪ್ರತಿಶತ ಸಾಲದ ಮೊತ್ತ ಸಂಸ್ಥಾಗತ ಮೂಲಗಳಿಂದ ಬರಲು ಪ್ರಾರಂಭವಾಗಿತ್ತು. ನಗರ ಪ್ರದೇಶಗಳ ಮಾಹಿತಿಯೂ ಇದಕ್ಕಿಂತ ತೀವ್ರ ಭಿನ್ನತೆಯನ್ನೇನೂ ತೋರಿರಲಿಲ್ಲ. 1991ರ ವೇಳೆಗೆ ಸಂಸ್ಥಾಗತ ಮೂಲಗಳ ಪಾಲು 56 ಪ್ರತಿಶತಕ್ಕೆ ಇಳಿದಿತ್ತು. 2003ರಲ್ಲಿ ಪ್ರಪಂಚ ಬ್ಯಾಂಕು ನಡೆಸಿದ ಒಂದು ದೊಡ್ಡ ಅಧ್ಯಯನದಲ್ಲಿ ಸಂಸ್ಥೆಗಳ ಪಾಲು ತುಸುವೇ ಬೆಳಿದಿದ್ದು 1971-1981 ನಡುವೆ ಕಂಡಂಥಹ ಯಾವ ದೊಡ್ಡ ಬದಲಾವಣೆಯೂ ಕಂಡುಬರಲಿಲ್ಲ.
ಹಾಗಾದರೆ ಸಂಸ್ಥಾಗತ ವಿತ್ತೀಯ ಸೇವೆಗಳು - ಮುಖ್ಯವಾಗಿ ಸಾಲದ ಸೌಲಭ್ಯ - ಈಗಿರುವ ಸುಮಾರು 60 ಪ್ರತಿಶತದಷ್ಟೇ ಪಾಲಿನಲ್ಲಿ ಸ್ಥಗಿತಗೊಂಡಿರುತ್ತವೆಯೋ - ಅಥವಾ ಅದು ಬೆಳೆಯಬಹುದೋ.. ಸಾಕಷ್ಟು ಸುದ್ದಿ ಮಾಡುತ್ತಿರುವ ಮೈಕ್ರೋಫೈನಾನ್ಸ್ ಸಂಸ್ಥೆಗಳು ಗ್ರಾಮೀಣ ಬಡ್ಡಿವ್ಯಾಪಾರಿಯನ್ನು ಹೊರಗಟ್ಟುತ್ತವೆಯೋ ಅಥವಾ ಬ್ಯಾಂಕುಗಳ ಧಂಧೆಯನ್ನು ಕಬಳಿಸುತ್ತವೆಯೋ ಅನ್ನುವುದು ಕುತೂಹಲದ ಮಾತು. ಬ್ಯಾಂಕುಗಳಿಂದಲೇ ದೊಡ್ಡ ಸಾಲವನ್ನ ಪಡೆದು - ಪುಟ್ಟಸಾಲಗಳನ್ನಾಗಿ ಹಂಚುತ್ತಿರುವ ಮೈಕ್ರೊಫೈನಾನ್ಸ್ ಸಂಸ್ಥೆಗಳು 18 ರಿಂದ 28 ಪ್ರತಿಶತ ಬಡ್ಡಿಯನ್ನು ಬಡವರಿಂದ ಪಡೆಯುತ್ತ ಬ್ಯಾಂಕುಗಳು ಮಾಡಲಾಗದ, ಆದರೆ ಮಾಡಲು ಸಾಧ್ಯವಿರಬಹುದಾದ ಕೆಲಸವನ್ನು ಮಾಡಿ ತೋರಿಸುತ್ತಿವೆ. ಆದರೂ ಎಲ್ಲ ಮೈಕ್ರೋಫೈನಾನ್ಸ್ ಕಂಪನಿಗಳು ಸೇರಿ ಒಟ್ಟಾರೆ ರೂ.20,000 ಕೋಟಿಗಿಂತ ಕಡಿಮೆ ವ್ಯಾಪಾರ ಮಾಡುತ್ತಿರುವ ಸಂದರ್ಭದಲ್ಲಿ ಅವರುಗಳು ಬ್ಯಾಂಕುಗಳಿಗೆ ಜೋರಾದ ಪೈಪೋಟಿ ನೀಡುವುದು ಕಷ್ಟದ ಮಾತೇ. ಅದೂ ಅಲ್ಲದೆ ಈ ಸಂಸ್ಥೆಗಳ ಬಡ್ಡಿದರ ಮತ್ತು ವಸೂಲಿ ವಿಧಾನಗಳನ್ನು ಕಂಡವರು ಇಂಥ ಸಂಸ್ಥೆಗಳನ್ನು ಸಂಸ್ಥಾಗತ ಬಡ್ಡಿವ್ಯಾಪಾರಿಗಳೆಂದೂ ಕರೆಯುತ್ತಾರೆ.
ಸಣ್ಣ ಮೊತ್ತದ ಸಾಲದಲ್ಲಿ ಬಡ್ಡಿಯ ಪಾತ್ರ ಹಿರಿದಾದದ್ದೇನೂ ಅಲ್ಲವೆನ್ನುವ ವಾದವನ್ನು ನನ್ನನ್ನೊಳಗೊಂಡು ಅನೇಕರು ಮಂಡಿಸಿದ್ದಾರೆ. ಅದರೂ ಸರಕಾರ ಬ್ಯಾಂಕುಗಳ ಎರಡೂ ಕೈಗಳನ್ನು ಕಟ್ಟಿಹಾಕಿ ಮುಕ್ತಮಾರುಕಟ್ಟೆಯ ಅಖಾಡಕ್ಕೆ ಈ ಸಂಸ್ಥೆಗಳನ್ನು ಇಳಿಸಿದೆ. ಇತ್ತ ಸಮಾಜವಾದವೂ ಅಲ್ಲದ - ಅತ್ತ ಮುಕ್ತಮಾರುಕಟ್ಟೆಯೂ ಅಲ್ಲದ ಎಡಬಿಡಂಗಿ ನೀತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಒದ್ದಾಡುತ್ತಿವೆ. ಈ ಸಂಸ್ಥೆಗಳನ್ನು ಮಾರುಕಟ್ಟೆಯ ನಿಯಮಾನುಸಾರ ಕೆಲಸ ಮಾಡಲು ಬಿಟ್ಟರೆ, ಪ್ರತೀ ಗ್ರಾಮೀಣ ಶಾಖೆಯಲ್ಲೂ ಐದಾರು ಉದ್ಯೋಗಿಗಳು ಹಾಗೂ ಪ್ರತೀ ಗ್ರಾಹಕನಿಗೂ ಒಂದು ಕಪ್ ಚಹಾ ಸಿಗುವ ದಿನಗಳು ದೂರವಿರಲಾರವು. ಆದರೆ ಬಡ್ಡಿ ದರವನ್ನೇ ಉಸಿರಾಡುವ - ಎರಡು ದಶಕಗಳಿಗೊಮ್ಮೆ ಸಾಲಮನ್ನಾ ಮಾಡುವ ಸರಕಾರಕ್ಕೆ ತಿಳಿಹೇಳುವವರು ಯಾರು?
ಹೀಗೆ ಬ್ಯಾಂಕುಗಳಿಗಾಗುವ ಖರ್ಚನ್ನು ಸಂಪಾದಿಸುವ ಸ್ಥರಕ್ಕೆ ಬಡ್ಡಿದರ ಹೆಚ್ಚಿದರೂ ಬಡಗ್ರಾಹಕರು ಸಾಲಪಡೆಯುವುದನ್ನು ಮುಂದುವರೆಸುತ್ತಾರೆಂಬ ವಾದ ಪ್ರಶ್ನಾತೀತವೇನದ ಅಲ್ಲ. ಬಾಂಗ್ಲಾದೇಶದಲ್ಲಿ ನಡೆಸಿರುವ ಅಧ್ಯಯನದ ಆಧಾರದ ಮೇಲೆ ದಹೇಜಿಯಾ, ಮಾಂಟಗಮರಿ ಮತ್ತು ಮುರ್ಡೋಕ್ ಈ ವಾದವನ್ನು ಪ್ರಶ್ನಿಸುತ್ತಾರೆ. ಅವರ ಪ್ರಕಾರ - ಹೆಚ್ಚಿದ ಬಡ್ಡಿದರದಲ್ಲೂ ಜನ ಸಾಲ ಪಡೆಯಲು ತಯಾರಿರಬಹುದಾದರೂ ಸಂಸ್ಥೆಯ ಗ್ರಾಹಕ ಸಮೂಹ ಕಡುಬಡವರಿಂದ ತುಸು ದೂರ ಹೋಗುತ್ತಿರುವುದನ್ನು ಅವರುಗಳು ದಾಖಲಿಸಿದ್ದಾರೆ. ಸಂಸ್ಥಾಗತ ಮೂಲಗಳಿಂದ ಕೊಡುವ ಸಾಲದ ಪಾಲು ಒಟ್ಟಾರೆ 80-85 ಪ್ರತಿಶತ ತಲುಪುವವರೆಗೂ ರಾಜಕಾರಣಿಗಳು - ಸರಕಾರೀ ಯಂತ್ರಾಂಗದವರೂ ಈ ಪೇಪರನ್ನು ಓದದಿರುವುದೇ ಒಳಿತು.© ಎಂ.ಎಸ್.ಶ್ರೀರಾಮ್ |



© ಎಂ.ಎಸ್.ಶ್ರೀರಾಮ್ |